Saturday 6 September 2014

ಕವನ

ಆ ಮನ,,,


ಆ ಮನಕೆ
ಜೀವನದ ಸೌಂದರ್ಯವನ್ನು
ನಂಬಿಸುತ್ತಿದ್ದಳು
ಕರಿ ನೆರಳು,
ಕಳೆದ ಭಾವ
ಹೊಸಕಿದ ಕನಸಿನ ಪರಿವೆ
ಅವಳಿಗೂ ಇದ್ದ ಕಾಲ,

ಬೆಳಕು ಉರಿಯುತ್ತಿರಲು
ಕಣ್ಣಿಗೆ ಕಾಣದ ಗಾಳಿ
ಬೇಕಿದ್ದ ನೆಪವಿದೆ,,
ಬದುಕಲು ಒಳ ಒತ್ತಡವಿರಬೇಕು
ಪ್ರೀತಿಯಲಿ ತೇಲೊ ಹುಮ್ಮಸ್ಸಿರಬೇಕು
ಹುಟ್ಟು ಹಾಕಿ ದುಃಖಗಳನು
ಹಿಂದಾಕುತಾ ಮುಂದೆ ಸಾಗಬೇಕು..
ಆ ತೀರವ ಸೇರಲೆಂದು,, ಇಲ್ಲವೇ
ಮುಳುಗದೇ ಸಾಗಲೆಂದು,,
ಕರಿ ನೆರಳ ಹೀಗೊಂದು ನಿರೂಪಣೆ,,

02/09/2014

No comments:

Post a Comment