Tuesday 30 September 2014



ಕವಿತೆಗಳು ಮನಸ್ಸನ್ನು ತೆರೆದಿಟ್ಟರೆ
ಮನಸ್ಸು ವಾಸ್ತವದಲ್ಲೇ ಹುದುಗಿದೆ
ಒಮ್ಮೆ ನಗು ಒಮ್ಮೆ ಅಳು
ಅದುವೇ ಜೀವನ, ನಿತ್ಯವೂ ರಸ ಕಾವ್ಯ !!

%%%%%%%%%%%%%%%%%

ಚಂದ್ರಮಾ,
ನಿನ್ನ ಆಗಮನದ ಸಮಯವ ಬದಲಿಸಿಕೋ
ನೀ ಬರುವ ಹೊತ್ತಿಗೆ
ಉಂಡು ಮಲಗೋ ನಾನೂ ಇನ್ನೂ ದೂರ!
ತುಸು ಬೇಗ ಬಂದುಬಿಡು ಸಂಜೆಗೆ,,
ಒಟ್ಟಿಗೆ ಊಟ ಮಾಡೋಣ,, ಕತೆ ಕೇಳೋಣ
ನೀ ಹಾಡಿಗೆ ನಾ ನಿದಿರೆಗೆ ಹೊಂದಿಕೊಳ್ಳೋಣ!!

%%%%%%%%%%%%%

ಈ ಕವಿತೆಗಳಲ್ಲೇ ನಾ ಕಳೆದು ಹೋಗೋ ಭಯವಿದೆ!,
ಬಯಸಿದ್ದೆಲ್ಲವೂ ಸಿಕ್ಕಿಬಿಡೋ ಖುಷಿ,,
ವಾಸ್ತವೆಲ್ಲಾ ಊದಿ ಬಿಟ್ಟ ಬೂದಿ!
ಈ ಕವಿತೆಗಳಲ್ಲೇ ಕಳೆದು ಹೋಗೋ ಭಯವಿದೆ
ಆದರೂ ಜೊತೆಗೊಬ್ಬ ಗೆಳೆಯನ ಕವನ
ಕಳೆದು ಹೋದ ನನ್ನ ಹುಡುಕಿಕೊಡುವುದೆಂದೇ
ಸುಳ್ಳೇ ನನ್ನ ಆಶಯ!!

29/09/2014

No comments:

Post a Comment