Saturday 6 September 2014



ಜೀವನದ ದುರಂತಗಳನ್ನೆಲ್ಲಾ ಬಿಚ್ಚಿಡಬೇಕಿರಲಿಲ್ಲ
ಸೋಗಸೇನಿಲ್ಲ ನಿನ್ನಲಿ ಎನ್ನುವೆಯೇನೋ
ಎಂದಷ್ಟೇ ಹರಿದುಬಿಟ್ಟೆ ಅಂದು ಪದಗಳಲಿ

***********************

ಚಿಕ್ಕ ಮಗುವು ಕೈಯೊಳಿಂದ
ನವಿಲು ಗರಿಯ
ಕಿತ್ತುಕೊಂಡು ಓಡುವಂತೆ
ನೀ ನನ್ನಿಂದ ಮಾತುಗಳ
ಸೆಳೆದುಕೊಂಡು ಹೋದೆ,
ಮರಳಿಸುವುದಾದರೂ ಎಂದು?
ಹೇಳಿ ಹೋಗಬಾರದಿತ್ತೆ?!,,,,

**************************

ಚಿಗುರೋ ಹೃದಯಕೆ
ಏನೇನೋ ಆಸೆಗಳು ಕನಸುಗಳು,
ಪ್ರೀತಿ ಪ್ರೇಮ ಕನವರಿಕೆಗಳು,
ಅನಿರೀಕ್ಷಿತ ಹೊಡೆತಕೆ
ಜೀವನ ರಾಗ ಏರುಪೇರು,,
ದುಃಖ ಉಮ್ಮಳಿಸಲು
ಕಣ್ಣೀರ ಸುರಿಸಲಾರದ ಮೂಕ,,
ಕಣ್ಣಿರಿಗೆ ಮುತ್ತೋ ಧೂಳುಗಳ ಕಾರಣ
ಬತ್ತಿಸಿಕೊಳ್ಳೊ ಕೊಳಗಳ ಮಾಲೀಕರು!!
ಜೀವನವೊಂದು ನಾಟಕ,,
ನಗುವೊಂದು ಸಾಧನವದದ್ದು ವಿಪರ್ಯಾಸ,,

31/08/2014

************************************

ಬೆನ್ನ ಹಿಂದೆ ನಿಂತು ಎಷ್ಟು ಆಟವಾಡುವೆಯೋ ಕೃಷ್ಣ
ನವಿಲು ಗರಿಗಳೆಲ್ಲಾ ಚೆಲ್ಲಾಪಿಲ್ಲಿ ನೋಡು
ಮಡಿಕೆ ಬೆಣ್ಣೆಯೂ, ದೇವಕಿಗೆ ಮೊದಲೇ ತಿಳಿದಿತ್ತೋ ಏನೋ
ನಿನ್ನ ತುಂಟತನ ಅದಕೆ ನನಗೆ ವಹಿಸಿದಳು ನಿನ್ನ,,

*****************

ಇಲ್ಲ ಇಲ್ಲವೆಂದೇ ಕಳೆದೆ
ನಿನ್ನ ಇರುವಿಕೆಯ ಲೆಕ್ಕಿಸದೆ,
ಹೃದಯವಿರುವುರಾದರೂ ಹೇಗೆ
ಮಿಡಿಯುತ ನೀ ನಿಲ್ಲದೆ,,

30/08/2014

No comments:

Post a Comment