Sunday 13 April 2014





ಪ್ರಙ್ಞೆ ತಪ್ಪಿ ನಿದ್ರಿಸಿದವಳಿಗೆ
ನೀರೆರಚಿ ಎಚ್ಚರಿಸಿದಂತೀ ಮಳೆ
ಕಣ್ಣುಜ್ಜಿ ನೋಡಲೀ ಶಾಂತ ಜಗವ
ನೆನಪು ರಾಚಿದಂತೆ ಕಣ್ಮನ ಹುಡುಕಿದ್ದು ನಿನ್ನನ್ನೇ
ವಾಸ್ತವದಲ್ಲಿಲ್ಲದ ನಿನ್ನನ್ನೇ.....

10/04/2014

***

ಈಗಾಗಲೇ ವ್ಯರ್ಥವಾಗಿ
ಕಳೆದ ಹೊತ್ತುಗಳನ್ನು
ಪೋಣಿಸಿಕೊಳ್ಳುವಾಸೆ
ನಿನ್ನ ಮುತ್ತುಗಳಲಿ
ಎಂದು ಇದಿರುಗೊಳ್ಳುವೆ
ಓ ನನ್ನ ಚಂದಿರನೇ,
ಯಾರಿಲ್ಲ ಈ ಧರೆಯಲಿ
ನಿನ್ನಂತೆ ಎನ್ನ ಸೆಳೆದವ
ಅಂದಿಗೂ ಇಂದಿಗೂ
ನಡುವೆ ನಿರಂತರ,,,

***

(ಕಳೆದ ಭಾವದಳೊಮ್ಮೆ ಕರಗಿ)

ನನ್ನಿಂದ ನಿನಗೆ
ನಿನ್ನಿಂದ ನನಗೆ 
ಬೇಡವೀ ಅನುಕಂಪ,

ಹಾಗೆಯೇ ಬೇಡ
ನಮ್ಮಿಬ್ಬರಿಗೂ 
ನೋಡುವ ಜಗದ ಜನರದು,

ಸಾಧ್ಯವೇ ಈ ಬದುಕು 
ಎಡವಿತೆಂದೊಮ್ಮೆ ಮರುಗದೆ
ಮತ್ತೊಂದು ಹೊಸ ಬಾಳು?!!

***

ಬೇಡುವಾಗ ಏನೇನೂ ಫಲಿಸದು
ಬಿಟ್ಟು ಮುನ್ನೆಡೆವಾಗ ಎಲ್ಲವು ಫಲಿಸಿ ನಿಲ್ಲುವುದು
ನನಗದರ ಒಲವೇ ಇಂಗಿ ಹೋಗಿರುವುದು
ಕಾಲನ ನಿಯಮವೆಲ್ಲಿ ತಪ್ಪಿತೊ ಕಾಣದು

***

ರಾಮನ ಕಾಣಲು ಮನಸಿಗೆ
ಹನುಮನ ಹಸ್ತ ಬೇಕಿದೆ;
ಅವನ ಒಲಿಸಿಕೊಳ್ಳಲು
ಮತ್ತೂ ನಾ ರಾಮನೇ ಜಪಿಸಬೇಕಿದೆ,,
ಜೈ ಶ್ರೀ ರಾಮ್, ಜೈ ಹನುಮಾನ್

***

ಭಕ್ತಿಯ ಆಚರಣೆಗಳಿಗಿಂತ 
ನೀತಿಯ ಅನುಸರಣೆಗಳಲ್ಲಿ 
ನೆಮ್ಮದಿ ಕಾಣುವ ಮನಸ್ಸು
ಸದಾ ಇದ್ದಲ್ಲೇ ಕೈಲಾಸವ ಕಾಣ್ವದು

***

ರಾಮನೆಂದರೂ ಕೃಷ್ಣನೆಂದರೂ
ಒಬ್ಬನೇ 
ಆ ಯುಗಪುರುಷನೆನುವಾಗ
ರಾಮನಿಗೆ 
ರಾಧೆಯಾಗುವ ಕನಸಿದೆ
ಸೀತೆಯೊಳು
ಕಲಿಯುಗದಿ,,,

08/04/2014

***

ಕದ್ದಿದಷ್ಟೇ ಕನಸು
ಬಿತ್ತಿದೆಲ್ಲಾ ಬದುಕು
ನೀ ಕಂಡಂತೆ
ನಾ ಕಂಡಂತೆ
ಜಗ ಕಣ್ಮುಂಚಿಕೊಂಡಂತೆಯೂ,,

07/04/2014

***

ಏದುಸಿರು ಬಿಡುವಂತೊಮ್ಮೆ 
ನಿನ್ನ ಕಂಡಾಗ,
ಎನ್ನೆದೆಯಲೇನೋ 
ಆವೇಗ,
ಕನಸೇ ಕಣ್ಮುಂದೆ 
ನಿಂತಿರುವಾಗ
ಬಿಗಿದಪ್ಪಿದ ಕನಸುಗಳೆಲ್ಲಾ 
ಕೆರಳಿದಂತೆ
ನಲಿದಾಡಿದೆ
ನನ್ನೆಲ್ಲಾ 
ಹಿಡಿದಿಟ್ಟ ಭಾವಗಳು
ಒಮ್ಮೆಲೇ 
ಚಿಮ್ಮಿದಂತೆ
ಹರಿದಾಡಿದಂತೆ 
ಕೈಜಾರಿ ನಿನ ಬಯಸಿದಂತೆ, 
ಕಲ್ಪಿತ ಕನಸು ಇದಿರಲಿ 
ಸುಳಿದಾಡಿದಂತೆ
ಒಲವರಳಿಸೊ 
ಸ್ಫೂರ್ತಿ ಸಿಕ್ಕಂತೆ,,,

***

ಅಭಿಮಾನದ ಕಣ್ಣುಗಳಲ್ಲಿ
ನೋಡಿದ್ದೆಲ್ಲವೂ ಸುಂದರವೇ,,
ಅದು ಅಭಿಮಾನದ ತಪ್ಪೇ,,,,

06/04/2014

***

ನನ್ನ 
ಪ್ರೀತಿಗೆ 
ನೀನಿಟ್ಟ 
ಹೆಸರು 
ವಿರಹ; 
ಈಗದು 
ಮುಗಿಯದ 
ಬರಹ 

01/04/2014

No comments:

Post a Comment