Wednesday 1 April 2015




ಕೂತು 
ಹೆಚ್ಚು ಯೋಚಿಸಿ
ಕೀಳರಿಮೆಯ 
ಆಹ್ವಾನಿಸಿಕೊಳ್ಳುವುದಕ್ಕಿಂತ
ಒಂದಷ್ಟು 
ಬಿರುಸು 
ಹೆಜ್ಜೆಗಳನ್ನಿಟ್ಟು
ಘಾಟಿ 
ಎನಿಸಿಕೊಳ್ಳುವುದೇ 
ಲೇಸೆನಿಸಿದೆ..! 


*****

ನಿಜ ಹೇಳಲು ತುದಿಗಾಲಲ್ಲಿ
ನಿಲ್ಲುವವಳು
ನಿಜವೂ ಇಲ್ಲ ಸುಳ್ಳು ಇಲ್ಲ
ಮೌನದ ಮರೆಯ ಕನಸಿಗೆ ಸೋತು
ಬಹುಶಃ ಭವಿಷ್ಯದ ಅಪರಾಧಿಯಾದೆ!
ಕ್ಷಮಿಸಲಿ ಆ ಮನವು..
ನಿಲ್ಲಿಸಿಕೊಂಡು ಕಾಡಿದ್ದ ಕಾರಣಕೆ

*****

ಕಾವು ಕೊಟ್ಟ ಹಲವು ಸಾಲುಗಳಲ್ಲಿ
ಕೆಲವು ಮರಿಗಳಾಗಿವೆ
ಅವುಗಳ ಹಸಿವಿಗೆ
ನನಗೆ ಬಲೇ ಗಾಬರಿ!

29/03/2015

No comments:

Post a Comment