ದಿವ್ಯ ಚೇತನ
ಚುಟುಕು, ಕವನ, ಲೇಖನ ಮತ್ತು 'ಮನದ ಮಾತು'ಗಳು... :-)
Wednesday 15 April 2015
ಕವನ
ಕೊಳಲು ದನಿ
ಕೈ ಬಿಟ್ಟು
ಹೋಗುವ ಕೃಷ್ಣನ
ಇನ್ನೆಷ್ಟು ಹಿಡಿಯುವಳು
ರಾಧೆ
ಕೈ ಜಾರಿ
ಕೈಯೊಳುಳಿದ
ಕೊಳಲ ಹಿಡಿದು
ನುಡಿಸಲಾಗದ
ನಿರ್ಭಾವುಕತೆಗೆ
ಕೊಳಲ ನೀರಿಗೆಸೆದಳು
ಅಂದಿನಿಂದ
ನದಿಯೇ ಕೊಳಲ ದನಿಯಾಗಿ
ಮೊರೆಯುತ್ತಿದೆ
ರಾಧೆಯೂ
ಎಂದಿನಂತೆ ಕೊಳಲ ನಾದಕೆ
ದಡದ ವಾಸಿ..
ಚಿತ್ರ ಕೃಪೆ; ಅಂತರ್ಜಾಲ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment