Tuesday 17 June 2014

ಕವನ

ತಿರುಕನ ವೇದಾಂತ,,,, 


ಮನೆಯ ಬಾಗಿಲು ಬಡಿದು ಬೇಡಿದೆ,
ಹಸಿವಿದೆ ಅನ್ನವಿಕ್ಕೀ ಎಂದು,
ಬರೀ ಆಗ ಆಸೆಯಿತ್ತೆನಗೆ,
ಮುಖದ ಮೇಲೆಯೇ ಬಾಗಿಲು ಬಡಿದರು,

ಮುಂದಿನ ಮನೆ ಮುಂದಣ ಹೋಗಿ ಬೇಡಿದೆ,
ಇದ್ದವರಾಗಿ ಕೊಡುವವರಂತೆ ಮಾಡಿ
ಇಲ್ಲೆಂದು ಕೈಯಾಡಿಸಿ ಮುಂದೆ ಹೋಗೆಂದರು
'ನಿರೀಕ್ಷೆ' ಹುಟ್ಟಿಸಿದ್ದರು ಕೊಡುವವರಂತೆ,

ಮುಖದ ಮೇಲೆ ಬಡಿದ ಅಷ್ಟೂ ಬಾಗಿಲುಗಳು
ಮತ್ತೂ ಛಲ ಹುಟ್ಟಿಸಿದ್ದವು;
ನಾನು ಬೇಡಿಯಾದರೂ ಸರಿ ಈ ಹೊತ್ತಿಗೆ ಅನ್ನವ ಪಡೆವೆನೆಂದು
ಹೌದು ಮುಂದಿನ ಬಾಗಿಲೂ ತಟ್ಟಿಯೇಬಿಟ್ಟೇ
ನನಗಿದ್ದದ್ದು ಅನ್ನದ ಹಸಿವು; ಹೃದಯದ ಪ್ರೀತಿಯಲ್ಲ!

ಪ್ರೀತಿಗಾದರೂ ಒಂದೇ ಬಾಗಿಲು!
ಪ್ರೀತಿ ಬಾಗಿಲಿಗೆ ಕೈ ಕಾಲು ಕಟ್ಟಿಕೊಂಡಿರುವೆ
ಬಯಸುವೆನು, ಬೇಡಲಾರೆ,
ತಿರಸ್ಕಾರವ ಎದುರಿಸೋ ಶಕ್ತಿಯಿಲ್ಲ,,
ಪ್ರೀತಿ ಎಂದರೆ ಅನ್ನವಲ್ಲ ಬೇಡಲು,
ಪ್ರೀತಿ ಎಂದರೆ ಹಸಿವಲ್ಲ ಇಂಗಿಸಲು!!

17/06/2014

No comments:

Post a Comment