Saturday 14 June 2014

ಹೂ ಪಕಳೆಗಳ
ಸವರುತ್ತ ಬೆರಳುಗಳು,
ಮನವು ನಿನ್ನಧರವ ನೆನೆದಂತೆ
ಫಟ್ಟನೆ ಚುಚ್ಚಿದ ಮುಳ್ಳು
ತನ್ನ ಹತಾಶೆಯ ತೋರಿತು
ಈ ಹಿಂದೆಯೂ
ಕವಿತೆ ಕಟ್ಟಿ ಬರೆದೆನೆಂದು
ಕೆಂಪಗೆ ಮುನಿದಿದ್ದಳೀ ಗುಲಾಬಿ,,

_________________

ಸುನಾಮಿಗೂ ಮುನ್ನ
ಶಾಂತ ಸಾಗರವೇ
ಆಗಿತ್ತು!

___________________

ಬಹಳ ನಿರಾಳ ಸ್ಥಿತಿಯು
ಮತ್ತೇರಿದಂತೆ
ಮಂಪರು ತರಿಸುತ್ತದೆನೋ,,
ಪ್ರೀತಿಯಲಿ ಹೀಗೆಯೇ,
ಮಳೆಯಲಿ, ಪ್ರೀತಿ ಗುಂಗಲಿ,,

14/06/2014

No comments:

Post a Comment