Wednesday 9 December 2015

ಪದ್ಯ

ಕಣ್ಮುಚ್ಚಿ ಕೂತ ಬುದ್ಧ


ಕಣ್ಮುಚ್ಚಿ ಕೂತ
ಬುದ್ಧನೆದುರು
ನನ್ನದು ಪ್ರಶ್ನೆಗಳ ಸುರಿ ಮಳೆ
ಒಂದಕ್ಕಾದರೂ ಉತ್ತರಿಸುವನೇನೋ
ಕಾದು ಕೂತೆ... 

ಅಷ್ಟು ಹೊತ್ತು ಒದರಿದ ನಂತರ
ಒಂದು ದೀರ್ಘ ನಿಟ್ಟುಸಿರು
ಗಲಭೆ ನಿಂತ ಮನ
ಆವರಿಸಿದಂತೆ ಪ್ರಶಾಂತತೆ
ಬುದ್ಧನುದಯಿಸಿದ ತೋರಿ ಸಹನೆ... 

ಮಳೆಗಾಲದ ಕೋಗಿಲೆಯ 
ಮೌನ ಕಲಿಸಿದ
ಬದುಕಿನ ಪ್ರಶ್ನೆಗಳಿಗೆ 
ಮಳೆ ಋತು ಮಾನಗಳು ಸಮೀಕರಿಸಿದ
ಎದ್ದು ನಿಂತೆ 
ಕೆಲ ಪ್ರಶ್ನೆಗಳನ್ನಷ್ಟೇ ಆಯ್ದು 
ಅಲ್ಲಿಂದ ಹೊರಟುಬಿಟ್ಟೆ
ಬುದ್ಧನಿನ್ನೂ ಕಣ್ಮುಚ್ಚಿಯೇ ಕಾದು ಕೂತ
ಮತ್ತಿನ್ಯಾರಿಗೋ...

08/12/2015

No comments:

Post a Comment