Saturday 2 August 2014

ಕವನ

ಕಣ್ಬಾಣ,,,

ಅವಳ ಕವನದ ಕಣ್ಬಾಣಕೆ
ಅವರಾಗಿಯೇ ಎದುರಾಗಿ
ಎದೆಯೊಡ್ಡಿದ ತರುಣರು
ಅವಳಿಗೇಕೋ
ಎದುರಾಳಿಗಳಾಗಿ ಕಂಡರು,,

ಅವಳಿನ್ನೂ ಯುದ್ಧವ ಕೈಬಿಟ್ಟಿಲ್ಲ,
ಇವರೂ ಛಲವ ಕೈಬಿಟ್ಟಿಲ್ಲ,,
ಇದರ ನಡುವೆ ಅವನೂ ಬಂದೂ
ಎಲ್ಲಿಯೋ ಹೋದ,,

ಹುಡುಕಲೂ ಈಗ ತಾಳ್ಮೆಯಿಲ್ಲ,
ಸಿಕ್ಕರೂ ಈಗ ಕಾಲವಿಲ್ಲ,,
ಆದರೂ ಕವನಕ್ಕೇನು ಕಣ್ಣಿನ ಅಭಾವಲಿಲ್ಲ!!

02/08/2014

No comments:

Post a Comment